Sunday, June 13, 2021

ಗುರುವಾಣಿ 6: ಆಂಜನೇಯನ ಭಕ್ತಿ

 ಗುರುವಾಣಿ 6: ಆಂಜನೇಯನ ಭಕ್ತಿ

Voice of RK


 ಸಾಧು ಸಂತರ ರಕ್ಷಕ, ಅಸುರರ ಸಂಹಾರಕ, ಈಶ್ವರ ಅವತಾರಿ ಆಂಜನೇಯನ ಭಕ್ತಿ ಅಸಾಮಾನ್ಯವಾದದ್ದು. ಶ್ರೀಕೃಷ್ಣ ವಚನಾಮೃತ ಭಗವದ್ಗೀತೆ ಮತ್ತು ಹಿಂದೂ ಪುರಾಣ ಗ್ರಂಥಗಳಲ್ಲಿ ಭಕ್ತಿ ಎಂಬ ಪದಕ್ಕೆ ವಿಶೇಷ ವ್ಯಾಖ್ಯಾನವಿದೆ. ಒಂದು ವ್ಯಾಖ್ಯಾನದ ಪ್ರಕಾರ ಭಕ್ತಿ ಎಂಬುದು ದೇವರ ಆನಂದವನ್ನು ಮೆಲುಕು ಹಾಕಿ ಭೌತಿಕ ಬಂಧನ, ಅಜ್ಞಾನ, ಮತ್ತು ದುಃಖದಿಂದ ಬಿಡುಗಡೆ ಹೊಂದುವ ಮಾರ್ಗ. ಇದು ಆಧ್ಯಾತ್ಮಿಕ ಅಭ್ಯಾಸ ಹಾಗೂ ದೈವಿಕ ಮಾರ್ಗ.

 ಶುದ್ಧ, ನಿಸ್ವಾರ್ಥ ಹಾಗೂ ದೈವಿಕ ಭಕ್ತಿಗೆ ಮೆಚ್ಚಿ ಶ್ರೀ ರಾಮನೊಂದಿಗೆ ಪೂಜೆಗೆ ಯೋಗ್ಯನಾದ ಈ ವಾಯುಪುತ್ರನ ಭಕ್ತಿಯ ಗಾಢತೆಯನ್ನು ಅರಿತುಕೊಳ್ಳುವ ಪ್ರಯತ್ನವೇ ಇಂದಿನ ಗುರುವಾಣಿ.

 ಭಕ್ತಿ ಪ್ರೀತಿ ಎಂಬ ಬಂಧನದ ಕೊಂಡಿಯಿಂದ ಎರಡು ಮನಸ್ಸುಗಳನ್ನು ಬೆಸೆಯುತ್ತದೆ. ಶ್ರೇಷ್ಠ ಭಕ್ತಿ ಜೀವನವನ್ನು ಆನಂದವನ್ನು ಆಗಿಸುತ್ತದೆ. ಆದ್ದರಿಂದ ಭಕ್ತಿಯನ್ನು ಆನಂದ ಸ್ವರೂಪವೆಂದು ಕರೆಯುತ್ತಾರೆ. ಭಗವದ್ಗೀತೆಯ ಭಕ್ತಿಯೋಗದಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ಯಾವ ಭಕ್ತ ತನ್ನ ಮನಸ್ಸನ್ನು ಏಕಾಗ್ರತೆಗೆ ನಿರಂತರ ಭಜನೆ ಮತ್ತು ಜ್ಞಾನಗಳಿಂದ ಪರಮೇಶ್ವರನನ್ನು ಬಯಸುತ್ತಾನೋ ಅವನೇ ನಿಜವಾದ ಭಕ್ತ. ಭಕ್ತಿ ಯೋಗದ ಪ್ರಕಾರ ಭಗವಂತನನ್ನು ಒಲಿಸಿಕೊಳ್ಳಲು ಒಂಬತ್ತು ಬಗೆಯ ಭಕ್ತಿ ಮಾರ್ಗಗಳಿವೆ. ಶ್ರವಣ, ಕೀರ್ತನ, ಸ್ಮರಣೆ, ಪಾದ ಸೇವೆ, ಅರ್ಚನೆ, ವಂದನೆ ದಾಸ್ಯ, ಸಖ್ಯ, ಹಾಗೂ ಆತ್ಮ ನಿವೇದನೆ. 

ಇಂದ್ರಿಯಗಳಿಗೆ ಒಡೆಯನಾದ ಹನುಮಂತನ ಭಕ್ತಿ ಹೇಗಿತ್ತೆಂದರೆ ನಾವೊಂದು ನಿದರ್ಶನವನ್ನು ನೋಡೋಣ.

 ಭಗವಾನ್ ಶ್ರೀರಾಮ ವನವಾಸದಿಂದ ರಾಜ್ಯಕ್ಕೆ ಮರಳಿ ಬಂದ ನಂತರ ಒಂದು ದೇವ ಸಭೆ ನಡೆಯುತ್ತದೆ. ವಿಶ್ವಾಮಿತ್ರನು ಹೊರತುಪಡಿಸಿ ಎಲ್ಲಾ ದೇವ ಮುನಿಗಳನ್ನು ಸ್ವಾಗತಿಸುವ ಹೊಣೆಯನ್ನು ನಾರದ ಮುನಿಗಳು ಆಂಜನೇಯನಿಗೆ ನೀಡುತ್ತಾರೆ. ನಾರದ ಮುನಿಗಳ ಆದೇಶವನ್ನು ಆಂಜನೇಯ ತಪ್ಪದೆ ಪಾಲಿಸುತ್ತಾನೆ. ಕೋಪಗೊಂಡ ವಿಶ್ವಾಮಿತ್ರ ...... ಅಗೌರವ ತೋರಿದ ಹನುಮಂತನ ಕೃತ್ಯಕ್ಕೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕೆಂದು ರಾಮನನ್ನು ಆಗ್ರಹಿಸುತ್ತಾರೆ. ರಾಮನಿಗೆ ತನ್ನ ಗುರುವಿನ ಆಜ್ಞೆಯನ್ನು ನೇ ಗುರುವಿನ ಆಜ್ಞೆಯನ್ನು ನಿರ್ಲಕ್ಷಿಸಲಿಲ್ಲ. ಹನುಮಂತನಿಗೆ ಮರಣದಂಡನೆ ಯಾಯ್ತು.

 ಮುಂದೇನಾಯ್ತು ಗೊತ್ತಾ ಮರಣದಂಡನೆಗೊಳಗಾದ ಹನುಮಂತ ಬೇರೆನು ಯೋಚನೆ ಮಾಡಿದೆ ರಾಮ ನಾಮವನ್ನು ಜಪಿಸುತ್ತಿದ್ದ. ಹನುಮಂತನೇ ಅಖಂಡ ಭಕ್ತಿಗೆ ರಾಮನ ಯಾವ ಬಾಣವೂ ಆತನಿಗೆ ಹಾನಿ ಮಾಡಲಿಲ್ಲ ಇದನ್ನು ನೋಡಿ ಬೆರಗು ಗೊಂಡ ಶ್ರೀರಾಮ ತನ್ನ ಗುರುವಿನ ಆಜ್ಞೆಯನ್ನು ಪರಿಪಾಲಿಸಲು ವಿಶೇಷ ಆಯುಧವಾದ ಬ್ರಹ್ಮಾಸ್ತ್ರವನ್ನು ಹನುಮಂತನ ಮೇಲೆ ಪ್ರಯೋಗಿಸುತ್ತಾನೆ ಆದರೆ ಬ್ರಹ್ಮಾಸ್ತ್ರ ಕೂಡ ವಿಫಲಗೊಳ್ಳುತ್ತದೆ. ಈ ವಾಯುಪುತ್ರ ಅಖಂಡ ಭಕ್ತಿಗೆ ರಾಮ ಬಾಣವೇ ವಿಫಲಗೊಂಡು ಭಕ್ತಿ ಗೆಲ್ಲುತ್ತದೆ ಹಾಗೂ ಮರಣ ದಂಡನೆ ನಿಲ್ಲುತ್ತದೆ. ಇದು ಭಕ್ತಿಯ ಶಕ್ತಿಯನ್ನು ತೋರಿಸುತ್ತದೆ. ಭಕ್ತರ ನಿಜವಾದ ಭಕ್ತಿಗೆ ಬೆಲೆ ಏನೆಂಬುದಕ್ಕೆ ಇದೊಂದು ನಿದರ್ಶನ.

 ಆಂಜನೇಯ ಭಕ್ತರೇ ನಮಗೆ ಸರಿ ಎನಿಸಿದ ಭಕ್ತಿಯ ಮಾರ್ಗವನ್ನು ಆಯ್ದುಕೊಂಡು ಕಾಯ, ವಾಚ ಹಾಗೂ ಮನಸ್ಸಿನಿಂದ ಈ ಕೇಸರಿ ಪುತ್ರನನ್ನು ಧ್ಯಾನಿಸಿದರೆ ಸಂಕಷ್ಟಗಳ ಪರಿಹಾರ ಖಚಿತ 

|| ಓಂ ಆಂಜನೇಯಾಯ ನಮಃ||


No comments:

Post a Comment